ಹೊಸದಿಗಂತ ವರದಿ ಮಡಿಕೇರಿ:
ಗುಂಡು ಹಾರಿಸಿಕೊಂಡು ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕನ್ನಿಕಂಡ ಕುಟುಂಬದ ಸುಬ್ಬಯ್ಯ (74) ಮತ್ತು ಅವರ ಪತ್ನಿ ಭೋಜಮ್ಮ (72) ಆತ್ಮಹತ್ಯೆಗೆ ಶರಣಾದವರು.
ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.



