ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ. ಗ್ರಾಹಕರು, ಉದ್ಯೋಗಿಗಳು ಸೇರಿ ಹತ್ತು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತ್ಯಕ್ಷದರ್ಶಿ, ಹೊಟೇಲ್ ಸಿಬ್ಬಂದಿ ರಶೀದ್ ಹುಸೇನ್ ಹೇಳಿದ್ದಿಷ್ಟು..
ಸ್ಫೋಟ ಸಂಭವಿಸಿದಾಗ ಹೊಟೇಲ್ನ ಕೈ ತೊಳೆಯುವ ಬೇಸಿನ್ ಪಕ್ಕ ಕೂತಿದ್ದ ಮಹಿಳೆಗೆ ತುಂಬಾ ಗಾಯಗಳಾಗಿದೆ. ಸ್ಫೋಟಕ್ಕೂ ಮುನ್ನ ಬೀಪ್ ಬೀಪ್ ಸದ್ದು ಕೇಳಿತ್ತು. ಒಂದು ನಿಮಿಷದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ಸದ್ದಿಗೆ ಒಂದೆರಡು ನಿಮಿಷ ಯಾರಿಗೂ ಕಿವಿ ಕೇಳಿಸುತ್ತಿರಲಿಲ್ಲ. ಸುತ್ತ ಹೊಗೆ ಆವರಿಸಿತ್ತು.ಎಷ್ಟೊಂದು ಮಂದಿ ಗಾಯಗೊಂಡು ಒದ್ದಾಡುತ್ತಿದ್ದರು ಎಂದು ಹೇಳಿದ್ದಾರೆ.