ಹೊಸದಿಗಂತ ವರದಿ,ಕಲಬುರಗಿ:
ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಮಯದಲ್ಲಿ ಹಾವು ಕಡಿದು ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ್ ಎನ್ ಗ್ರಾಮದಲ್ಲಿ ನಡೆದಿದೆ.
ಜೈಭೀಮ್ ಮೂಲಿಮನಿ (5) ವಷ೯ದ ಬಾಲಕನೇ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಬಾಲಕನಾಗಿದ್ದಾನೆ.
ಸುಗೂರ್ ಎನ್ ಗ್ರಾಮದ ಮರಿಯಮ್ಮಾ ದೇವಿ ದೇವಸ್ಥಾನದ ಬಳಿ ಆಟ ಆಡುವಾಗ ಈ ಘಟನೆ ನಡೆದಿದೆ. ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.