ಹೊಸದಿಗಂತ ವರದಿ ಹುಬ್ಬಳ್ಳಿ:
ತಾಲೂಕಿನ ಅದರಗುಂಚಿಯಲ್ಲಿರುವ ಮತ ಕೇಂದ್ರಕ್ಕೆ ಕುಂದಗೋಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನನಗೌಡ ಅವರು ಧ್ವಜ ಹೊಂದಿದ್ದ ಕಾರನ್ನು ಮತಗಟ್ಟೆಯೊಳಗೆ ತೆಗದುಕೊಂಡು ಬಂದ ಕಾರಣ ಭದ್ರತಾ ಪಡೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಧ್ವಜ ತೆಗೆದ ಘಟನೆ ನಡೆಯಿತು.
ಕಾರು ಮತಗಟ್ಟೆ ಪ್ರವೇಶಿಸುತ್ತಿದ್ದಂತೆ ಭದ್ರತಾ ಪಡೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು. ಅನುಮತಿ ತೆಗದುಕೊಂಡಿದ್ದೇವೆ ಎಂದರು.
ಧ್ವಜ ಬಳಸಬಹುದು ಎಂದು ಹೇಳಿರುವುದಾಗಿ ಬೆಂಬಲಿಗರು ಸಮರ್ಥಿಸಿಕೊಂಡರು. ಆದರೆ ಮತದಾನ ದಿನ ಧ್ವಜ, ಚಿನ್ಹೆ ಪ್ರದರ್ಶಿಸುವಂತಿಲ್ಲ ಎಂದು ಹೇಳುತ್ತಿದ್ದಂತೆ ತಕ್ಷಣ ಧ್ವಜ ತೆಗೆದ ಘಟನೆ ನಡೆಯಿತು. ನಂತರ ಧ್ವಜ ತೆಗೆದ ವಾಹನದಲ್ಲಿ ಕ್ಷೇತ್ರ ಸಂಚಾರ ಮಾಡಿದರು.