ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಾಟ ನಡೆಸುತ್ತಿದ್ದ ವೇಳೆ ಮುಳುಗಡೆಯಾಗಿರುವ ಹಡಗಿನಿಂದ ಎಲ್ಲಾ ಎಂಟು ಮಂದಿ ಸಿಬ್ಬಂದಿಯನ್ನು ಲಕ್ಷದ್ವೀಪ ಸಮೂಹದ ಕಲ್ಪೇಣಿ ದ್ವೀಪದ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಮಂಗಳೂರಿನ ಹಳೆ ಬಂದರಿನ ಧಕ್ಕೆಯಿಮದ ಹೊರಟಿದ್ದ ಈ ಹಡಗು, ಅಗಥಿ ದ್ವೀಪಕ್ಕೆ ಸಾಗುವ ಹಾದಿಯಲ್ಲಿ ಗಾಳಿಯ ಒತ್ತಡಕ್ಕೆ ಸಿಲುಕಿತ್ತು. ಇದರ ಪರರಿಣಾಮವಾಗಿ ಹಡಗಿನ ಎಂಜಿನ್ ಕೈಕೊಟ್ಟಿತ್ತಲ್ಲದೆ ಹಡಗಿನೊಳಗೆ ನೀರು ನುಗ್ಗಿ ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು. ಹಡಗು ಮುಳುಗುವುದು ಖಚಿತವಾಗುತ್ತಲೇ ಸಿಬ್ಬಂದಿಗಳು ಪುಟ್ಟ ದೋಣಿಯಲ್ಲಿ ಕಡಲಿಗಿಳಿದಿದ್ದು, ಇದೀಗ ಇವರನ್ನು ಮೀನುಗಾರರು ರಕ್ಷಿಸಿದ್ದಾರೆ.