ಹೊಸದಿಗಂತ ವರದಿ, ಕೊಪ್ಪಳ:
ಪತಿಯು ತ್ರಿವಳಿ ತಲಾಖ್ ಎಂದು ಮೂರು ಸಲ ಉಚ್ಛರಿಸಿ ಹೋದ ಘಟನೆ ನಗರದಲ್ಲಿ ನಡೆದಿದ್ದು, ತ್ರಿವಳಿ ತಲಾಖ್ ಅಡಿ ಪ್ರಕರಣ ದಾಖಲಾಗಿದೆ.
ಮೂಲತಃ ಗಜೇಂದ್ರಗಡದ ಖಾಲೀದಾ ಬೇಗಂ ಎಂಬುವರು ಕೊಪ್ಪಳದ ಮರಿಶಾಂತವೀರ ನಗರದಲ್ಲಿ ವಾಸವಾಗಿದ್ದರು. ಪತಿ ಸೈಯದ್ ವಾಹೀದ್ ಅತ್ತಾರ್ ಕಿರುಕುಳ ನೀಡುತ್ತಿದ್ದಾನೆ ಎಂದು 2021ರಲ್ಲಿ ಮಹಿಳಾ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದರು.
ಸೆ. 15ರಂದು ಸೈಯದ್ ವಾಹೀದ್ ನ್ಯಾಯಾಲಯಕ್ಕೆ ಬಂದಿದ್ದ. ಇದೇ ವೇಳೆ ತನ್ನ ತಂದೆ ಜೊತೆ ಬಂದಿದ್ದ ಖಾಲೀದಾ ಬೇಗಂನನ್ನು ತಡೆದು ನಿಲ್ಲಿಸಿದ ಸೈಯದ್ ಷರಿಯತ್ ಪ್ರಕಾರ ಬೇರೆ ಮದುವೆಯಾಗುತ್ತೇನೆ. ನಿನಗೆ ತಲಾಖ್ ಕೊಡುತ್ತೇನೆ. ನಿನಗೂ ನನಗೂ ಯಾವುದೇ ಸಂಬಂಧವಿಲ್ಲ. ತಂಟೆಗೆ ಬಂದರೆ ಸಾಯಿಸಿ ಬಿಡುತ್ತೇನೆ ಎಂದು ಬೆದರಿಸಿ ಮೂರು ಬಾರಿ ತಲಾಕ್ ಉಚ್ಛರಿಸಿ ಹೋಗಿದ್ದಾನೆ. ತ್ರಿವಳಿ ತಲಾಖ್ ಅಡಿ ಆತನ ವಿರುದ್ಧ ಸೆ. 18ರಂದು ದೂರು ದಾಖಲಾಗಿದೆ ಎಂದು ಎಸ್ಪಿ ಅರುಣಾಂಗ್ಶು ಗಿರಿ ತಿಳಿಸಿದರು.