ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಕೊಡಗು ಗಡಿ ಭಾಗದಲ್ಲಿ ಭಾನುವಾರ ಮುಂಜಾನೆ ಭೂಮಿನಡುಗಿದ ಬೆನ್ನಲ್ಲೇ ಹಾನಿನಷ್ಟಗಳು ಕಾಣಿಸಿಕೊಂಡಿದೆ.
ಭೂ ಕಂಪನದ ತೀವ್ರತೆಗೆ ಕಲ್ಲುಗುಂಡಿ ಮಠದ ಮೂಲೆ ಬಳಿಯ ನಿವಾಸಿ ತಾಜುದ್ದೀನ್ ಎಂಬವರ ಮನೆ ಹಿಂಬದಿ ಭೂಮಿ ಬಿರುಕು ಬಿಟ್ಟಿದೆ. ಮನೆ ಹಿಂಬದಿಯಲ್ಲಿ ಭೂ ಕುಸಿತ ಕಾಣಿಸಿದ್ದು, ಮನೆಗೆ ಹಾನಿಯಾಗುವ ಭೀತಿ ಎದುರಾಗಿದೆ. ಭೂ ಕಂಪನದ ತೀವ್ರತೆಗೆ ಈ ಬಾಗದ ಹಲವೆಡೆಗಳಲ್ಲಿ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.