ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯ ಪ್ರತಾಪುರ್ ಅರಣ್ಯ ವ್ಯಾಪ್ತಿಯಲ್ಲಿ ಶನಿವಾರ ಹೆಣ್ಣು ಆನೆಯ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇನ್ನೊಂದು ಆನೆ ದಾಳಿಗೆ ಸಿಲುಕಿ ಆನೆ ಮೃತಪಟ್ಟಿರುವುದು ಕಂಡುಬಂದಿದೆ ಎನ್ನಲಾಗಿದೆ.
ಆನೆಯ ದಂತದ ಬಳಿ ಗಾಯಗಳಾಗಿವೆ. ಆದರೆ, ಆನೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಸೂರಜ್ಪುರದ ಡಿಎಫ್ಒ ಸಂಜಯ್ ಯಾದವ್, “ದಂತದ ಬಳಿ ಗಾಯಗಳಾಗಿದ್ದು, ಅದು ಇನ್ನೊಂದು ಆನೆಯಿಂದ ದಾಳಿಗೆ ತುತ್ತಾಗಿರಬಹುದು ಎಂದು ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಗ್ರಾಮಸ್ಥರು ಮುಂಜಾಗ್ರತೆ ವಹಿಸುವಂತೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಛತ್ತೀಸ್ಗಢದ ಕೊರ್ಬಾದಲ್ಲಿ ಭತ್ತದ ಜಮೀನಿನಲ್ಲಿ ಆನೆ ಮರಿಯನ್ನು ಕೊಂದು ಅದರ ಶವವನ್ನು ಹೂತುಹಾಕಿದ ಆರೋಪದಲ್ಲಿ ಕನಿಷ್ಠ 12 ಜನರನ್ನು ಬಂಧಿಸಲಾಗಿದೆ ಮತ್ತು ಒಬ್ಬ ಅಪ್ರಾಪ್ತನನ್ನು ಬಂಧಿಸಲಾಗಿದೆ.
ಆರೋಪಿಗಳು ಅಕ್ಟೋಬರ್ 18 ರಂದು ಆನೆ ಮರಿಯನ್ನು ಗುರುತಿಸಿ ಮರುದಿನ ವಿಷ ನೀಡಿ ಸಾಯಿಸಿದ್ದಾರೆ. ಇದೇ ವೇಳೆ ಆನೆ ಮರಿ ನಾಪತ್ತೆಯಾದಾಗ ಮರಿ ಸೇರಿದ್ದ 44 ಆನೆಗಳ ಹಿಂಡು ಅಟ್ಟಹಾಸ ಮೆರೆದು ಸಮೀಪದ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಹಾಗೂ ಮೂರು ಜಾನುವಾರುಗಳನ್ನು ಕೊಂದು ಹಾಕಿವೆ ಎಂದು ಏಎನ್ಐ ವರದಿ ತಿಳಿಸಿದೆ.