ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುವರ್ಷದ ಕನಸು ಇಂದು ನನಸಾಗಿದ್ದು, ರಾಮಮಂದಿರದಲ್ಲಿ (Ram Mandir) ರಾಮಲಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ದೇಶಾದ್ಯಂತ ಸಂತಸ ಮನೆ ಮಾಡಿದೆ. ಪಾಕಿಸ್ತಾನದಲ್ಲಿಯೂ ರಾಮಮಂದಿರ ಉದ್ಘಾಟನೆಯ ಸಂಭ್ರಮ ಕಂಡುಬಂದಿದೆ.ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯಾ (Danish Kaneria) ಅಭಿನಂದನೆ ಸಲ್ಲಿಸಿದ್ದಾರೆ.
ದಾನಿಶ್ ಕನೇರಿಯಾ ತಮ್ಮ ಅಧಿಕೃತ ಟ್ವೀಟರ್ ಎಕ್ಸ್ ಖಾತೆಯಲ್ಲಿ ರಾಮಮಂದಿರ ಉದ್ಘಾಟನೆಯ ಫೋಟೊಗಳನ್ನು ಹಂಚಿಕೊಂಡು, ‘ಭಗವಾನ್ ರಾಮ್ ಆಗಮಿಸಿದ್ದಾರೆ. ಜೈಶ್ರೀರಾಮ್. ಎಲ್ಲ ಹಿಂದುಗಳಿಗೂ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
Congratulations! Bhagwan Ram has arrived #JaiShreeRam pic.twitter.com/W45qHNCP7X
— Danish Kaneria (@DanishKaneria61) January 22, 2024
ಕನೇರಿಯಾ 2 ದಿನಗಳ ಹಿಂದಷ್ಟೇ ರಾಮಲಲ್ಲಾನ ವಿಗ್ರಹದ ಫೋಟೊವನ್ನು ಹಂಚಿಕೊಂಡು ‘ನನ್ನ ರಾಮ ಈಗ ವಿರಾಜಮಾನ” ಎಂದು ಬರೆದುಕೊಂಡಿದ್ದರು. ಇದಕ್ಕೂ ಮುನ್ನ ಭಗವಾಧ್ಬಜ ಹಿಡಿದು ಸಂಭ್ರಮಿಸಿದ್ದರು. ಈ ಎಲ್ಲ ಫೋಟೊ ಮತ್ತು ವಿಡಿಯೊ ವೈರಲ್ ಆಗಿತ್ತು.
Jai Shree Ram 🙏🙏❤️❤️ pic.twitter.com/vcowGg8fYj
— Danish Kaneria (@DanishKaneria61) January 22, 2024