ಬಹುವರ್ಷದ ಕನಸು ನನಸು: ಭಗವಾನ್ ರಾಮ್ ಆಗಮಿಸಿದ್ದಾರೆ ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುವರ್ಷದ ಕನಸು ಇಂದು ನನಸಾಗಿದ್ದು, ರಾಮಮಂದಿರದಲ್ಲಿ (Ram Mandir) ರಾಮಲಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ದೇಶಾದ್ಯಂತ ಸಂತಸ ಮನೆ ಮಾಡಿದೆ. ಪಾಕಿಸ್ತಾನದಲ್ಲಿಯೂ ರಾಮಮಂದಿರ ಉದ್ಘಾಟನೆಯ ಸಂಭ್ರಮ ಕಂಡುಬಂದಿದೆ.ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯಾ (Danish Kaneria) ಅಭಿನಂದನೆ ಸಲ್ಲಿಸಿದ್ದಾರೆ.

ದಾನಿಶ್ ಕನೇರಿಯಾ ತಮ್ಮ ಅಧಿಕೃತ ಟ್ವೀಟರ್​ ಎಕ್ಸ್​​ ಖಾತೆಯಲ್ಲಿ ರಾಮಮಂದಿರ ಉದ್ಘಾಟನೆಯ ಫೋಟೊಗಳನ್ನು ಹಂಚಿಕೊಂಡು, ‘ಭಗವಾನ್ ರಾಮ್ ಆಗಮಿಸಿದ್ದಾರೆ. ಜೈಶ್ರೀರಾಮ್. ಎಲ್ಲ ಹಿಂದುಗಳಿಗೂ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.

ಕನೇರಿಯಾ 2 ದಿನಗಳ ಹಿಂದಷ್ಟೇ ರಾಮಲಲ್ಲಾನ ವಿಗ್ರಹದ ಫೋಟೊವನ್ನು ಹಂಚಿಕೊಂಡು ‘ನನ್ನ ರಾಮ ಈಗ ವಿರಾಜಮಾನ” ಎಂದು ಬರೆದುಕೊಂಡಿದ್ದರು. ಇದಕ್ಕೂ ಮುನ್ನ ಭಗವಾಧ್ಬಜ ಹಿಡಿದು ಸಂಭ್ರಮಿಸಿದ್ದರು. ಈ ಎಲ್ಲ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!