ಸಿಲ್ಚಾರ್ ಪ್ರವಾಹದ ನಡುವೆ ‘ಬಾಲಕೃಷ್ಣನ ಎತ್ತಿ ಒಯ್ದ ವಾಸುದೇವ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಲಕ್ಷಾಂತರ ಜನ ನಿರಾಶ್ರಿತಾರಾಗಿದ್ದಾರೆ. ಪ್ರವಾಹದಿಂದಾಗಿ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಹೆತ್ತವರು ಇನ್ನಿಲ್ಲದ ಮಾರ್ಗ ಹುಡುಕುತ್ತಿದ್ದಾರೆ. ಈ ನಿಟ್ಟಿನಲ್ಲಿ, ಮಳೆನೀರಿನಿಂದ ತುಂಬಿ ಹೋಗಿರುವ ಮನೆಯಿಂದ ತನ್ನ ಹಸುಗೂಸನ್ನು ಕಾಪಾಡಿಕೊಳ್ಳಲು ಸಿಲ್ಚಾರ್‌ನಲ್ಲಿ ಒಬ್ಬ ತಂದೆ ಬುಟ್ಟಿಯಲ್ಲಿ ಮಗುವನ್ನೆತ್ತಿಕೊಂಡು ಪ್ರವಾಹದಲ್ಲಿ ನಡೆಯುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

ಈ ದೃಶ್ಯವನ್ನು, ಕೃಷ್ಣನನ್ನು ಕಂಸನಿಂದ ಕಾಪಾಡಲು ವಾಸುದೇವ ಜೋರು ಮಳೆಯಲ್ಲಿ ಯಮುನಾ ನದಿ ಮೂಲಕ ಗೋಕುಲಕ್ಕೆ ಕರೆದೊಯ್ದ ಘಟನೆಗೆ ಹೋಲಿಕೆ ಮಾಡಿದ್ದಾರೆ. ಭಗವಾನ್‌ ಶ್ರೀ ಕೃಷ್ಣನನ್ನು ಹೊತ್ತು ವಾಸುದೇವ ಯಮುನಾ ನದಿ ದಾಟುವ ಪ್ರಸಂಗ ನೆನಪಾಯಿತು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!