ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಲಕ್ಷಾಂತರ ಜನ ನಿರಾಶ್ರಿತಾರಾಗಿದ್ದಾರೆ. ಪ್ರವಾಹದಿಂದಾಗಿ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಹೆತ್ತವರು ಇನ್ನಿಲ್ಲದ ಮಾರ್ಗ ಹುಡುಕುತ್ತಿದ್ದಾರೆ. ಈ ನಿಟ್ಟಿನಲ್ಲಿ, ಮಳೆನೀರಿನಿಂದ ತುಂಬಿ ಹೋಗಿರುವ ಮನೆಯಿಂದ ತನ್ನ ಹಸುಗೂಸನ್ನು ಕಾಪಾಡಿಕೊಳ್ಳಲು ಸಿಲ್ಚಾರ್ನಲ್ಲಿ ಒಬ್ಬ ತಂದೆ ಬುಟ್ಟಿಯಲ್ಲಿ ಮಗುವನ್ನೆತ್ತಿಕೊಂಡು ಪ್ರವಾಹದಲ್ಲಿ ನಡೆಯುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ದೃಶ್ಯವನ್ನು, ಕೃಷ್ಣನನ್ನು ಕಂಸನಿಂದ ಕಾಪಾಡಲು ವಾಸುದೇವ ಜೋರು ಮಳೆಯಲ್ಲಿ ಯಮುನಾ ನದಿ ಮೂಲಕ ಗೋಕುಲಕ್ಕೆ ಕರೆದೊಯ್ದ ಘಟನೆಗೆ ಹೋಲಿಕೆ ಮಾಡಿದ್ದಾರೆ. ಭಗವಾನ್ ಶ್ರೀ ಕೃಷ್ಣನನ್ನು ಹೊತ್ತು ವಾಸುದೇವ ಯಮುನಾ ನದಿ ದಾಟುವ ಪ್ರಸಂಗ ನೆನಪಾಯಿತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
A father wades through flood water with his newborn baby in Silchar, Assam.
Feels like Basudev ji crossing Jamuna river with Bhagwan Krishna Ji in his head❤️ pic.twitter.com/yJekcUXbXI
— AbhishekkK (@Abhishekkkk10) June 21, 2022