ಅಯೋಧ್ಯೆಯತ್ತ ಹರಿದು ಬಂದ ಭಕ್ತರ ದಂಡು: ಬಾಲರಾಮನ ದರುಶನ ಪಡೆದ 3 ಲಕ್ಷ ಜನರು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಭವ್ಯ ರಾಮ ಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆವಾಗಿದೆ. ಇಂದಿನಿಂದ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ.
ಇಂದು ಬೆಳಗ್ಗೆಯಿಂದ ಆಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆಯಿಂದ ಇದುವರೆಗೆ ಭವ್ಯ ರಾಮ ಮಂದಿರಕ್ಕೆ ತೆರಳಿದ ರಾಮಲಲಾ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿದೆ.

ಆಯೋಧ್ಯೆಗೆ ಭಕ್ತರು ದಂಡೇ ಆಗಮಿಸುತ್ತಿದೆ. 3 ಲಕ್ಷ ಭಕ್ತರು ಶ್ರೀ ರಾಮಲಲಾ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಇಷ್ಟೇ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಕ್ಯೂನಲ್ಲಿ ನಿಂತಿದ್ದಾರೆ. ಲಕ್ಷಾಂತರ ಭಕ್ತರು ಆಯೋಧ್ಯೆಗೆ ಆಗಮಿಸಿರುವ ಕಾರಣ ಜನಸಂದಣಿ ಹೆಚ್ಚಾಗಿದೆ. ಹೀಗಾಗಿ ಭಕ್ತರ ಶಾಂತಿ ಹಾಗು ಸಹನೆಯಿಂದ ರಾಮಲಲಾ ದರ್ಶನ ಪಡೆಯಲು ಟ್ರಸ್ಟ್ ವಿನಂತಿಸಿದೆ.

ಪ್ರತಿ ದಿನ ರಾಮಮಂದಿರ ಬೆಳಗ್ಗೆ 7 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ. 11.30ರ ವರೆಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಕಗಳು ನಡೆಯಲಿದೆ. ಬಳಿಕ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!