ರಕ್ಷಣಾ ದೋಣಿಯಲ್ಲೇ ಮುದ್ದಾದ ಮಗುವಿಗೆ ಜನ್ಮ ನೀಡಿದಳು ಪ್ರವಾಹ ಸಂತ್ರಸ್ತೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರವಾಹ ಪೀಡಿತ ಪ್ರದೇಶದಿಂದ ಸ್ಥಳಾಂತರಿಸುವ ವೇಳೆ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಗೃಹರಕ್ಷಕ ಸಿಬ್ಬಂದಿಗಳೇ ಹೆರಿಗೆ ಮಾಡಿಸಿದ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ನೆರೆ ನೀರು ನುಗ್ಗಿ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಗಂಗಲೂರು ತಹಸಿಲ್‌ನ ಜೋರ್ಗಯಾ ಗ್ರಾಮದ ಬಳಿ ಗರ್ಭಿಣಿಯೋರ್ವರು ನೆರೆಯಲ್ಲಿ ಸಿಲುಕಿಕೊಂಡ ಮಾಹಿತಿ ಪಡೆದ ಸಿಬ್ಬಂದಿಗಳು ಅಲ್ಲಿಗೆ ಧಾವಿಸಿ ಆಕೆಯನ್ನು ಉಪ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಮುಂದಾಗಿದ್ದರು. ರಕ್ಷಣಾ ದೋಣಿ ಮೂಲಕ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಿಬ್ಬಂದಿಗಳ ನೆರವಿನಲ್ಲಿ ಆಕೆಗೆ ಸ್ಟ್ರೆಚರ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ಮತ್ತು ತಾಯಿ ಇಬ್ಬರನ್ನೂ ರಕ್ಷಣಾ ದೋಣಿಯಲ್ಲಿ ನದಿ ದಾಟಿ ರೆಡ್ಡಿ ಗ್ರಾಮದ ಉಪ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!