ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದಲ್ಲಿ ಜೀವಕ್ಕೂ ಖಾತ್ರಿ ಇಲ್ಲ. ಜೀವ ಉಳಿಸುವ ಭರವಸೆ ಮೋದಿಯವರದ್ದು. ಜೆಡಿಎಸ್ ಮೈತ್ರಿಯಿಂದಾಗಿ ನಮ್ಮ ಬಲ ಹೆಚ್ಚಿದೆ. 400 ಕ್ಷೇತ್ರವೇ ಗೆಲ್ಲಬೇಕು. ಲಾಕರ್ ಕೋಣೆಯಲ್ಲಿ ನಾವು ಗೆಲ್ಲಬೇಕು. ನಾಳೆಯಿಂದ ನಿಮ್ಮ ಶಕ್ತಿ ಕೇಂದ್ರದಲ್ಲಿ ಶ್ರಮಿಸಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕರ್ತರಿಗೆ ಕರೆ ನೀಡಿದರು.
ಲೋಕಸಭೆ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಇದು ಪಂಚಾಯತ್ ಚುನಾವಣೆಯಲ್ಲ. ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಅತ್ಯಂತ ಕೆಳಮಟ್ಟಕ್ಕೆ ಕೊಂಡೊಯ್ದಿದೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವೂ ಅಲ್ಲ. ಘಟಬಂಧನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. 2040ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕನಸು ಕಾಣುತ್ತಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದರು.
ಪ್ರಸಕ್ತ ವಿದ್ಯಮಾನಗಳು ನೋಡಿದ್ರೆ, ದೇಶದ ಘನತೆ ಗೌರವಗಳನ್ನು ಉಳಿಸಿಕೊಳ್ಳುವ ನಮ್ಮೆಲ್ಲರ ಜವಾಬ್ದಾರಿ ಮತ್ತು ಹೊಣೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕು. ನಮ್ಮ ಮತ ಬಿಜೆಪಿ ಗೆ ಮೀಸಲು.