ತೆಂಗಿನಕಾಯಿ ತುಂಬಿದ್ದ ಲಾರಿ ಪಲ್ಟಿ, ತೆಂಗಿನಕಾಯಿ ತುಂಬಿಕೊಂಡ ಜನ! ಚಾಲಕ ಬದುಕಿದ್ದಾರಾ? ಕೇಳೋರಿಲ್ಲ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಜನರು ಅಪಘಾತದ ಜಾಗಕ್ಕೆ ಕವರ್, ಚೀಲದ ಸಮೇತ ಬಂದಿದ್ದಾರೆ.

ಮಂಡಲ ಜಗದೂರ್ತಿ ವೇದಿಕೆ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಉರುಳಿ ಬಿದ್ದಿದೆ. ತೆಂಗಿನಕಾಯಿ ತುಂಬಿದ್ದ ಲಾರಿ ಪಲ್ಟಿಯಾದ ಕಾರಣ ಜನ ತೆಂಗಿನಕಾಯಿ ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.

ಲಾರಿಯ ಮುಂಭಾಗದ ಟೈರ್ ಸ್ಫೋಟಗೊಂಡು ಚಾಲಕನಿಗೆ ಲಾರಿ ನಿಯಂತ್ರಣಕ್ಕೆ ಸಿಕ್ಕಿಲ್ಲ, ಸ್ಥಳೀಯರಲ್ಲಿ ಯಾರೋ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬರುಷ್ಟರಲ್ಲಿ ಆ ರಸ್ತೆಯಲ್ಲಿ ಓಡಾಡಿದ ಜನರೆಲ್ಲ ಕೆಳಗಿಳಿದು ತಮ್ಮ ಕಾರ್ ಡಿಕ್ಕಿಗಳಿಗೆ ಕಾಯಿ ತುಂಬಿಸಿಕೊಂಡಿದ್ದಾರೆ.

ಚೀಲ ತೆಗೆದುಕೊಂಡು ಬಂದು ಕಾಯಿ ಹಾಕಿಕೊಂಡು ಹೋಗಿದ್ದಾರೆ. ಯಾರೊಬ್ಬರೂ ಚಾಲಕನ ಸ್ಥಿತಿ ಬಗ್ಗೆ ಒಬ್ಬರೂ ತಲೆ ಕೆಡಿಸಿಕೊಂಡಿಲ್ಲ, ಚಾಲಕ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!