ಹೊಸದಿಗಂತ ವರದಿ, ಮಡಿಕೇರಿ:
ಕಾವೇರಿ ನದಿಯಲ್ಲಿ ಈಜಲು ತೆರಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಗುರುವಾರ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ಹಿತ್ಲೆ ಹೆಬ್ಬಾಗಿಲು ಗ್ರಾಮದ ಶಿವಣ್ಣ( 50) ಎಂಬವರೇ ಸಾವಿಗೀಡಾದವರು.
ಕುಶಾಲನಗರ ಕಾವೇರಿ ನದಿಯ ಸೇತುವೆಯ ಸಮೀಪದಲ್ಲಿರುವ ಗುಂಡಿಯಲ್ಲಿ ನಿಂತ ನೀರಿನಲ್ಲಿ ಈಜಲು ಹೋದ ಸಂದರ್ಭ ಘಟನೆ ನಡೆದಿದೆ.
ಕುಶಾಲನಗರ ಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ