ಮಾಟ ಮಂತ್ರದ ಭೀತಿಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಹೊಸದಿಗಂತ ವರದಿ,ಮೈಸೂರು:

ತನಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಮಾನಸಿಕ ಭೀತಿಗೆ ಒಳಗಾದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.

ಮಧುಕರ್(೨೨) ಮೃತಪಟ್ಟ ಯುವಕ . ಇವರ ತಂದೆ ಮುರಳೀಧರ್ ಅರ್ಚಕರಾಗಿದ್ದು ಪತ್ನಿ ವಿಚ್ಛೇದನ ಪಡೆದ ಕಾರಣ ಮಗ ಮಧುಕರ್ ಜೊತೆ ಗೋಕುಲಂ ನಲ್ಲಿ ವಾಸವಿದ್ದಾರೆ.

ಡಿಪ್ಲೊಮಾದಲ್ಲಿ ಫೇಲ್ ಆದ ಮಧುಕರ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.ಹೊರಗೆ ಹೋಗಿದ್ದ ತಂದೆ ಮನೆಗೆ ಹಿಂದಿರುಗಿದಾಗ ಕೊಠಡಿಯಲ್ಲಿ ಮಧುಕರ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಮಾಟ ಮಂತ್ರ ಮಾಡಿಸಿದ್ದಾರೆಂಬ ಭೀತಿಗೆ ಒಳಗಾಗಿದ್ದ ಮಧುಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ಮುರಳಿಧರ್ ನೀಡಿದ ದೂರಿನನ್ವಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!