ಹೊಸದಿಗಂತ ವರದಿ,ವಿಜಯಪುರ:
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಹಸಿ ಕಬ್ಬಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಉತ್ನಾಳ ಗ್ರಾಮದಲ್ಲಿ ನಡೆದಿದೆ.
ನಗರ ನಿವಾಸಿ ಈರಯ್ಯ ಮಲ್ಲಯ್ಯ ಮಠ ಹತ್ಯೆಯಾಗಿರುವ ವ್ಯಕ್ತಿ.
ಈರಯ್ಯ ಮಠ ಈತನನ್ನು, ಗಾನಯ್ಯ, ಸಿದ್ದಯ್ಯ ಹಾಗೂ ಇನ್ನಿತರ ಕೂಡಿಕೊಂಡು ಕಬ್ಬಿನ ಜಮೀನಿನಲ್ಲಿ ಕಬ್ಬಿನಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವಿಗೀಡಾಗಿದ್ದಾನೆ.