ಹೊಸ ದಿಗಂತ ವರದಿ,ಶಿವಮೊಗ್ಗ ;
ತರಕಾರಿ ವ್ಯಾಪಾರಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಹಣ ದರೋಡೆ ಮಾಡಿರುವ ಘಟನೆ ತಡರಾತ್ರಿ ನಗರದಲ್ಲಿ ನಡೆದಿದೆ.
ಭದ್ರಾವತಿ ಮೂಲದ ತರಕಾರಿ ವ್ಯಾಪಾರಿ ಶಿವಮೊಗ್ಗದ ಎಪಿಎಂಸಿಯಲ್ಲಿ ಸೊಪ್ಪು ಖರೀದಿ ಮಾಡಿ ಸಂತೆಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದರು. ಅದರಂತೆ ಭಾನುವಾರ ಬೆಳಗಿನ ಜಾವ 04 ಗಂಟೆ ಸುಮಾರಿಗೆ ಭದ್ರಾವತಿಯಿಂದ ಶಿವಮೊಗ್ಗ ನಗರಕ್ಕೆ ಬಂದು ರೈಲ್ವೆ ನಿಲ್ದಾಣ ರಸ್ತೆ ಮೂಲಕ ಎಪಿಎಂಸಿ ಕಡೆ ಬೈಕ್ ಮೂಲಕ ತೆರಳುತ್ತಿದ್ದರು.
ಈ ವೇಳೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ನಂತರ ಮುಂದೆ ಸಾಗಿ ವ್ಯಾಪಾರಿಗೆ ಅಡ್ಡ ಹಾಕಿ ನಿಲ್ಲಿಸಿಧ್ದಾರೆ. ಬಳಿಕ ಓರ್ವ ಚಾಕು ತೋರಿಸಿ ನಿನ್ನ ಬಳಿ ಇರುವ ಹಣ ಕೊಡು ಎಂದು ಬೆದರಿಸಿದ್ದಾನೆ. ವ್ಯಾಪಾರಿ ನಿರಾಕರಿಸಿದಾಗ ಜೇಬಿನಲ್ಲಿ ಇದ್ದ ವ್ಯಾಪಾರಕ್ಕೆಂದು ತಂದಿದ್ದ 10 ಸಾವಿರ ಹಣ ಹಾಗೂ ಬೈಕ್ ಕೀ ಕಿತ್ತುಕೊಂಡು ಪರಾರಿ ಆಗಿದ್ದಾರೆ. ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.