ದಿಗಂತ ವರದಿ ಹಾವೇರಿ:
ಮತದಾನಕ್ಕೆ ಅಸಡ್ಡೆ ತೋರುವವರ ಮಧ್ಯ ಅದರ ಪ್ರಾಮುಖ್ಯತೆ ತೋರುವವರು ಇದ್ದಾರೆ. ಇದಕ್ಕೆ ಉದಾಹರಣೆ ಇಲ್ಲಿದೆ. ಹಾನಗಲ್ಲ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ವಾಟರ್ ಮ್ಯಾನ ಆಗಿ ಕಾರ್ಯ. ನಿರ್ವಹಿಸುತ್ತಿದ್ದ ನಾಗಪ್ಪ ಕಾಳಂಗಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರ ಅಂತ್ಯ ಸಂಸ್ಕಾರ ಮಂಗಳವಾರ ಕುಟುಂಬಸ್ಥರು ಬಂದುಗಳು ನೆರವೇರಿಸು ಮುನ್ನ ಮೃತನ ಪತ್ನಿ, ಮಗ-ಮಗಳು ಮತದಾನ ಮಾಡಿ ತಮ್ಮ ಕರ್ತವ್ಯ ಮೆರೆದು ಹಕ್ಕು ಚಲಾಯಿಸಿದರು.
ಮನೆ ಯಜಮಾನ ಮೃತನಾಗಿದ್ದು, ಹೀಗಿರುವಾಗಲೂ ಈತನ ಪತ್ನಿ ಚಿನ್ನವ್ವ, ಮಗ ಮಾಲತೇಶ, ಮಗಳು ಜ್ಯೋತಿ ದುಃಖದ ಮಡುವಿನಲ್ಲೇ ಇದ್ದರು ಸಹಿತ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಜವಾಬ್ದಾರಿ ಮೆರೆದು ಮತ ಚಲಾಯಿಸುವಂತೆ ಸಂದೇಶ ಸಾರಿದ್ದಾರೆ.