ದಿಗಂತ ವರದಿ ರಾಯಚೂರು :
ಮಾನವಿ ತಾಲೂಕಿನ ತಮ್ಮಾಪುರ ಗ್ರಾಮದಲ್ಲಿ ಮಧ್ಯಾಹ್ನ 11:30 ರ ಸಮಯದಲ್ಲಿ ಒಬ್ಬ ಮತದಾರರು ಇಲ್ಲದೆ ಮತಗಟ್ಟೆ ಬಿಕೋ ಎನ್ನುತ್ತಿತ್ತು.
ಒಟ್ಟು 320 ಮತದಾರರಿದ್ದು11:30 ರ ವರೆಗೆ 165 ಮತದಾರರು ಮತ ಚಲಾವಣೆ ಮಾಡಿದ್ದರು.
ಬಿಸಿಲಿನ ತಾಪ ಅಧಿಕವಾಗಿಲ್ಲದಿದ್ದರೂ ಸಹ ಜನತೆ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಲಿ ಹಿಂಜರಿಕೆ ಮಾಡಿರುವುದು ಕಂಡು ಬಂದಿತು.
ಪ್ರಸಕ್ತ ಬರಗಾಲ ಇದ್ದಿದ್ದರಿಂದ ಗ್ರಾಮದಲ್ಲಿನ ಜನತೆ ದುಡಿಯಲು ಬೇಂಗಳೂರು ಸೇರಿದಂತೆ ಇತರೆ ಪ್ರದೇಶಗಲಿಗೆ ದುಡಿಯಲು ನೂರಕ್ಕೂ ಅಧಿಕ ಜನರು ಹೋಗಿದ್ದಾರೆ ಹೀಗಾಗಿ 250-275ಜನಮತದಾನ ಮಾಡಬಹುದು ಎಂದು ಗ್ರಾಮಸ್ಥರು ಹೇಳಿದರು.