ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವು ಯಾವ ರೂಪದಲ್ಲಿ ಯಾವಾಗ ಬರುತ್ತದೆ ಎಂದು ಹೇಳೋದು ಅಸಾಧ್ಯವಾದ ಮಾತು. ಮನೆ ಮುಂದಿನ ರೆಗ್ಯುಲರ್ ಅಂಗಡಿಯಲ್ಲಿ ಮೊಟ್ಟೆ ಬೋಂಡ ತಿನ್ನುವ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ತೆಲಂಗಾಣದ ವನಪರ್ತಿಯ ಗೋವಿಂದಹಳ್ಳಿಯ ಗೊಲ್ಲ ತಿರುಪತಯ್ಯ ಮಾಮೂಲಿನಂತೆ ತಮ್ಮ ಫೇವರೆಟ್ ಮೊಟ್ಟೆ ಬೋಂಡ ತಿನ್ನಲು ಹೋಗಿದ್ದಾರೆ.
ಮೊಟ್ಟೆ ಬೋಂಡ ಬಾಯಿಗೆ ಇಟ್ಟ ನಂತರ ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡಲು ತೊಂದರೆ ನೀಡಿದೆ. ಎಷ್ಟೇ ಪ್ರಯತ್ನಪಟ್ಟರೂ ಅದನ್ನು ಹೊರಗೆ ಹಾಕಲು ಆಗಿಲ್ಲ. ಉಸಿರಾಡಲಾಗದೇ ಒದ್ದಾಡಿ ತಿರುಪತಯ್ಯ ಪ್ರಾಣ ಬಿಟ್ಟಿದ್ದಾರೆ.
ಪತ್ನಿ ಸುವರ್ಣ ಹಾಗೂ ಇನ್ನಿತರರ ಸಹಾಯದಿಂ ಬಾಯಿಂದ ಬಜ್ಜಿ ಹೊರಬಂದಿತ್ತು, ಆದರೆ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿಹೋಗಿತ್ತು. ಇಲ್ಲೇ ಬೋಂಡ ತಿನ್ನಲು ಹೋದ ಪತಿ ಕಣ್ಣೆದುರೇ ಮೃತಪಟ್ಟಿದ್ದನ್ನು ಕಂಡು ಸುವರ್ಣ ರೋದಿಸಿದ್ದಾರೆ.
ಮಕ್ಕಳಿಗೂ ದೊಡ್ಡ ಪೀಸ್ ಆಹಾರ ಅಥವಾ ದ್ರಾಕ್ಷಿ, ಪಾಪ್ಕಾರ್ನ್ ಮುಂದಾದ ಆಹಾರ ಕೊಡುವ ಮುನ್ನ ಜಾಗರೂಕರಾಗಿರಿ.