ಹೊಸದಿಗಂತ ವರದಿ, ಹುಬ್ಬಳ್ಳಿ:
ಮಾರುಕಟ್ಟೆಗೆ ಬಂದ ಬಂಡಿವಾಡ ಗ್ರಾಮದ ಮಲ್ಲೇಶಪ್ಪ ಬಸವರಡ್ಡೆರ (60) ಹೃದಯಘಾತದಿಂದ ಮೃತ ಪಟ್ಟ ಘಟನೆ ಇಲ್ಲಿಯ ಕೋಟ್೯ ವೃತ್ತದ ಸಾಯಿ ಮಂದಿರ ಹತ್ತಿರ ನಡೆದಿದೆ.
ಮಂಗಳವಾರ ನಗರದ ಮಾರುಕಟ್ಟಗೆ ಬಂದು ವಿವಿಧ ವಸ್ತುಗಳನ್ನು ಖರೀದಿಸಿ ಊರಿಗೆ ತೆರಳಲು ಬಸ್ ಗಾಗಿ ಕಾಯುತ್ತಿರುವಾಗ ಏಕಾಏಕಿ ಹೃದಯಘಾತವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ವಿಷಯ ತಿಳಿಯುತ್ತಿದಂತೆ ಮೃತ ಪಟ್ಟ ವ್ಯಕ್ತಿಯ ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ