ಕೆರೆ ಸ್ವಚ್ಛಗೊಳಿಸಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಕೆರೆಯಲ್ಲಿ ಕಸ ಹಾಗೂ ಸತ್ತಿರುವ ಮೀನುಗಳನ್ನು ತೆಗೆದು ಸ್ವಚ್ಛಗೊಳಿಸಲು ಕೆರೆಗೆ ಇಳಿದು ಕೆಲಸ ನಿರ್ವಹಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಯಿಮಣ ಗ್ರಾಮದ ಅನವುಮೂಲೆ ಎಂಬಲ್ಲಿ ಸೋಮವಾರ ನಡೆದಿದೆ.

ಅನವುಮೂಲೆ ನಿವಾಸಿ ಜಗದೀಶ(41) ಮೃತಪಟ್ಟವರು.ಅವರು ತಮ್ಮ ತೋಡಿನಲ್ಲಿದ್ದ ಕೆಲವು ಮೀನುಗಳನ್ನು ಭಾನುವಾರ ಅವರ ತೋಟದ ಕೆರೆಗೆ ತಂದು ಬಿಟ್ಟಿದ್ದರು. ಆದರೆ, ಅವುಗಳು ಸೋಮವಾರ ಸತ್ತು ಹೋಗಿದ್ದವು ಇವುಗಳನ್ನುಹಾಗೂ ಕೆರೆಯಲ್ಲಿದ್ದ ಕಸಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಕೆರೆಗೆ ಇಳಿದಿದ್ದರು. ಆದರೆ, ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿದ್ದರು. ಈ ಬಗ್ಗೆ ಮೃತರ ಪತ್ನಿ ಸುಪ್ರೀತ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!