ಪಂದ್ಯದ ವೇಳೆ ತಲೆಗೆ ಬಾಲ್ ಬಡಿದು ಮೈದಾನದಲ್ಲೇ ಪ್ರಾಣಬಿಟ್ಟ ಆಟಗಾರ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಮುಂಬೈನ ಮತುಂಗಾದಿಂದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಟಿ-20 ಪಂದ್ಯದ ವೇಳೆ 52 ವರ್ಷದ ಕ್ರಿಕೆಟಿಗರೊಬ್ಬರು ಸಾವನ್ನಪ್ಪಿದ್ದಾರೆ.

ಕುಟ್ಚಿ ಕಮ್ಯುನಿಟಿಯು ಮತುಂಗ ಜಿಮ್ಖಾನ ದಡ್ಕರ್ ಮೈದಾನದಲ್ಲಿ ಟಿ-20 ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿತ್ತು. ಒಂದೇ ಮೈದಾನದಲ್ಲಿ ಏಕಕಾಲಕ್ಕೆ ಹಲವು ಪಂದ್ಯಗಳು ನಡೆಯುತ್ತಿದ್ದವು. ಅಂತೆಯೇ ಜಯೇಶ್ ಸವ್ಲಾ ಅನ್ನೋರು ಕೂಡ ಕ್ರಿಕೆಟ್​ ಪಂದ್ಯವೊಂದರ ಭಾಗವಾಗಿದ್ದರು.

ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಇವರ ತಲೆಗೆ ಬಾಲ್ ಬಡಿದಿದೆ. ಇನ್ನೊಂದು ಪಂದ್ಯದ ಆಟಗಾರ ಬಾರಿಸಿದ್ದ ಬಾಲ್, ಜಯೇಶ್​ ಸವ್ಲಾ ತಲೆಗೆ ಹೊಡೆದಿದೆ. ಅರಿವಿಗೆ ಬಾರದಂತೆ ಚೆಂಡು ಬಿರುಸಿನಿಂದ ತಾಗಿದ ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರೊಳಗೆ ಜಯೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತಲೆಗೆ ಕ್ರಿಕೆಟ್ ಬಾಲ್ ಬಿದ್ದು ಸಾವನ್ನಪ್ಪಿರುವ ಪ್ರಕರಣ ಇದೀಗ ಎಲ್ಲರಲ್ಲೂ ಆತಂಕ ಮೂಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!