SHOCKING | ಗಾಳಿಪಟದ ಮಾಂಜಾಗೆ ಸಿಲುಕಿ ಪೊಲೀಸ್ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಬೈನಲ್ಲಿ ಗಾಳಿಪಟದ ಮಾಂಜಾಗೆ ಸಿಲುಕಿ ಕತ್ತು ಸೀಳಿ ಪೊಲೀಸ್ ಮೃತಪಟ್ಟಿದ್ದಾರೆ.

ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ಬೈಕ್‌ನಲ್ಲಿ ತೆರಳುವ ವೇಳೆ ಕತ್ತಿಗೆ ದಾರ ಸಿಲುಕಿದೆ, ಕ್ಷಣಮಾತ್ರದಲ್ಲಿ ಪೊಲೀಸ್ ಮೃತಪಟ್ಟಿದ್ದಾರೆ.

ಸುರೇಶ್ ಜಾಧವ್ ಬೈಕ್‌ನಲ್ಲಿ ತೆರಳುವ ವೇಳೆ ಕತ್ತು ಸೀಳಿ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!