ಹೊಸದಿಗಂತ ಡಿಜಿಡಲ್ ಡೆಸ್ಕ್:
ಮರದಿಂದ ಹಾಲು ಸುರಿಯುವುದು, ನೀರಿನಲ್ಲಿ ಪ್ರಸಾದ ಸಿಗುವುದು, ವರ್ಷಾನುಗಟ್ಟಲೆ ದೇವರ ದೀಪ ಆರದೇ ಇರುವುದು ಹೀಗೆ ನಾನಾ ಪವಾಡಗಳ ಬಗ್ಗೆ ನೀವು ಕೇಳಿದ್ದೀರಿ. ಅದೇ ರೀತಿ ಬೆಂಗಳೂರಿನಲ್ಲಿ ಮರದಿಂದ ಕೆಂಪುದ್ರವ ಸುರಿಯುತ್ತಿದ್ದು, ಪವಾಡ ಎಂದು ಜನ ಕೈ ಮುಗಿಯುತ್ತಿದ್ದಾರೆ.
ಮಾಗಡಿ ರಸ್ತೆಯ ಜಿಟಿ ಮಾಲ್ ಬಳಿ ಇರುವ ಮರದ ತೊಗಡೆ ತೆಗೆದಾಗ ಕೆಂಪು ಬಣ್ಣದ ದ್ರವ ಸೋರಿದೆ. ನೋಡಲು ಇದು ರಕ್ತದಂತೆ ಕಾಣಿಸಿದೆ. ರಸ್ತೆಯಲ್ಲಿ ಜನ ನಿಂತಿದ್ದು, ಇದು ದೇವರ ಪವಾಡ ಎಂದು ಕೈ ಮುಗಿದಿದ್ದಾರೆ. ಇದು ಯಾವ ಮರ, ಯಾವ ಕಾರಣದಿಂದ ದ್ರವ ಸುರಿಯುತ್ತಿದೆ, ಯಾವ ದ್ರವ ಇದು ಎನ್ನುವ ಬಗ್ಗೆ ಮಾಹಿತಿ ದೊರಕಿಲ್ಲ.