ಹೊಸದಿಗಂತ ವರದಿ, ವಿಜಯಪುರ:
ಓಡೋಡಿ ಬಂದು ಕಲ್ಲಿಗೆ ಜೋರಾಗಿ ತಲೆ ಜಜ್ಜಿ ದೇವರಿಗೆ ನಮಸ್ಕಾರ ಮಾಡಿ ಭಕ್ತಿ ಮೆರೆಯುವ ವಿಲಕ್ಷಣ ಜಾತ್ರೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆದಿದೆ.
ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆ ವೇಳೆ ಈ ವಿಲಕ್ಷಣ ಆಚರಣೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಓಡೋಡಿ ಬಂದು ದೊಡ್ಡ ಕಲ್ಲಿಗೆ ಭಕ್ತರು ತಲೆ ಜಜ್ಜಿಕೊಳ್ಳುತ್ತಾರೆ. ಒಟ್ಟು ಮೂರು ಸಲ ತಲೆ ಜಜ್ಜಿ ಭಕ್ತರು ನಮಸ್ಕಾರ ಮಾಡುತ್ತಾರೆ.
ನೂರಾರು ಜನರಿಂದ ನಡೆಯುವ ಈ ವಿಶಿಷ್ಟ ಆಚರಣೆಯಲ್ಲಿ, ಕಲ್ಲಿಗೆ ಎಷ್ಟೇ ಜೋರಾಗಿ ತಲೆ ಜಜ್ಜಿಕೊಂಡರು ಯಾರಿಗೂ ಗಾಯವಾಗುವುದಿಲ್ಲ.
ಸೋಮೇಶ್ವರ ದೇವರ ಶಕ್ತಿಯಿಂದ ಯಾವುದೇ ಅಪಾಯ ಆಗುವುದಿಲ್ಲ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಕಾರ್ತೀಕ ಮಾಸದ ಬಳಿಕ ಈ ವಿಶಿಷ್ಟ ಆಚರಣೆಯ ಜಾತ್ರೆ ನಡೆಯುತ್ತದೆ.