ಹೊಸದಿಗಂತ ವರದಿ, ಮಂಗಳೂರು:
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ. ಮಂಗಳೂರು ಪೊಲೀಸರ ತಂಡ ಆತನ ಹಣದ ಮೂಲದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.
ಶಾರಿಕ್ಗೆ ಹಣ ಒದಗಿಸುತ್ತಿದ್ದವರ ಹಿಂದೆ ಬಿದ್ದಿರುವ ಪೊಲೀಸರು ಈ ನಿಟ್ಟಿನಲ್ಲಿ ಹಲವರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲೂ ಕೆಲವರನ್ನು ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗಿದೆ. ಈ ನಡುವೆ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ) ಹಸ್ತಾಂತರಿಸುವ ಅಂತಿಮ ಸಿದ್ಧತೆ ನಡೆದಿದೆ. ಶೀಘ್ರವೇ ಪ್ರಕರಣ ಮಂಗಳೂರು ನ್ಯಾಯಾಲಯದ ಮೂಲಕ ಎನ್ಐಎಗೆ ತನಿಖೆ ಹಸ್ತಾಂತರವಾಗಲಿದೆ.