ವೈಯಕ್ತಿಕ ದ್ವೇಷಕ್ಕೆ ಬಿತ್ತು ಹೆಣ, ತಲೆಗೆ ಬಲವಾದ ಪೆಟ್ಟು!

ಹೊಸದಿಗಂತ ವರದಿ ಹುಬ್ಬಳ್ಳಿ:

ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಓರ್ವನನ್ನು ಯಾವುದೋ ವಸ್ತುವಿನಿಂದ ತಲೆಗೆ ಬಲವಾಗಿ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ತಡ ರಾತ್ರಿ ಗೋಕುಲ ರಸ್ತೆಯ ಪ್ರತಿಷ್ಠಿತ ಖಾಸಗಿ ಹೋಟೆಲ್ ವೊಂದರ ಎದುರಿಗೆ ನಡೆದಿದೆ.

ಸಟ್ಲಮೆಂಟ್ ನ ಗಂಗಾಧರ ನಗರದ ನಿವಾಸಿ ಸುಶಾಂತ ದಾಂಡೇಲಿ ಹತ್ಯೆಯಾಗಿದ್ದು, ರಾಹುಲ್ ಗೋಕಾಕ, ಮಹೇಶ, ಸಾಗರ, ಲಕ್ಷ್ಮಣ ಹಾಗೂ ಪವನ ಹತ್ಯೆ ಮಾಡಿದ ಆರೋಪಿತರು. ಗೋಕುಲ ರೋಡ್ ಪೊಲೀಸ ಠಾಣೆಯಲ್ಲಿ ಮೃತ ಸುಶಾಂತ ಅವರ ಸಹೋದರ ರಾಮಪ್ಪ ದಾಂಡೇಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, ಮೃತ ದೇಹವನ್ನು ಕಿಮ್ಸ್ ಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!