ಹೊಸದಿಗಂತ ವರದಿ ಮಡಿಕೇರಿ:
ಪ್ರವಾಸಕ್ಕೆಂದು ತೆರಳಿದ ಕೊಡಗಿನ ವಿದ್ಯಾರ್ಥಿಯೊಬ್ಬ ಸಮುದ್ರಪಾಲಾದ ಘಟನೆ ಕೇರಳದ ಕಣ್ಣೂರಿನ ಪಯ್ಯಂಬಳ ಎಂಬಲ್ಲಿ ನಡೆದಿದೆ.
ಕೊಡಗಿನ ಸೋಮವಾರಪೇಟೆ ತಾಲೂಕಿನ ನೇರುಗಳಲೆ ಪಂಚಾಯತ್ ಸದಸ್ಯೆ ತಣ್ಣೀರು ಹಳ್ಳ ನಿವಾಸಿ ಕವಿತಾ ಹಾಗೂ ಸಚಿನ್ ದಂಪತಿಯ ಪುತ್ರ ಸೃಜನ್ ಮೃತ ಬಾಲಕ.
ಈತ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಸಿಕೊಂಡು ಪೋಷಕರು, ಬಂಧುಗಳೊಂದಿಗೆ ಕಣ್ಣೂರಿಗೆ ವಿಹಾರಕ್ಕೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ.
ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.