ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು ಫ್ಲೈ ಓವರ್ ಮೇಲ್ಭಾಗದಲ್ಲಿ ಬೈಕ್ ಮತ್ತು ಅಂಬುಲೆನ್ಸ್ ಮುಖಾಮುಖಿ ಡಿಕ್ಕಿ ಹೊಡೆದು ಸವಾರ ಸಾವಿಗೀಡಾದ ಘಟನೆಯು ಭಾನುವಾರ ಸಂಭವಿಸಿದೆ.
ಉಚ್ಚಿಲ ಬಡಾಗ್ರಾಮದ ನಾರಾಯಣ ಗುರು ರಸ್ತೆಯ ನಿವಾಸಿ ಪ್ರತಿಭಾನ್ವಿತ ರಿತೇಶ್ ದೇವಾಡಿಗ (೩೬) ಎಂಬಾತನೇ ಮೃತ ದುರ್ದೈವಿ.
ದ್ವಿಮುಖ ಸಂಚಾರಕ್ಕೆ ತೆರೆದುಕೊಂಡಿದ್ದ ಪಶ್ಚಿಮ ಭಾಗದ ಹೆದ್ದಾರಿ ಮೇಲ್ಸೇತುವೆಯಲ್ಲಿ ನಡೆದ ಈ ಅಪಘಾತದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ರಿತೇಶ್ ದೇವಾಡಿಗರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.