ಹೊಸದಿಗಂತ ವರದಿ, ಮಡಿಕೇರಿ
ಆಹಾರ ಅರಸಿ ಬಂದ ಕಾಡಾನೆಯೊಂದು ಗುಂಡಿಗೆ ಬಿದ್ದ ಘಟನೆ ವೀರಾಜಪೇಟೆಯ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಿಸಿದ್ದಾರೆ.
ಕೆ.ಬೈಗೋಡು ಗ್ರಾಮದ ಎಚ್.ಎ.ಗಣೇಶ್ ಅವರ ಮನೆ ಬಳಿ ತೋಡಿದ್ದ ಗುಂಡಿಗೆ ಕ ಆಕಸ್ಮಿಕವಾಗಿ ಬಿದ್ದ ಕಾಡಾನೆ ಹೊರಬರಲಾರದೆ ಪರದಾಡುತ್ತಿತ್ತು.
ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಜೆಸಿಬಿ ಮೂಲಕ ಮಣ್ಣು ತೆಗೆದು ಆನೆ ಹೊರಬರಲು ಸಹಕರಿಸಿದರು.
ನಂತರ ಆನೆಯನ್ನು ಅಯ್ಯಪ್ಪ ದೇವರ ಕಾಡಿಗೆ ಓಡಿಸಲಾಯಿತು.
ಕಾರ್ಯಾಚರಣೆಯಲ್ಲಿ ಡಿಸಿಎಫ್ ಜಗನ್ನಾಥ್, ಎಸಿಎಫ್ ನೆಹರೂ, ಆರ್ ಎಫ್ಒ ದೇವಯ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.