ಹೊಸದಿಗಂತ ವರದಿ,ತುಮಕೂರು :
ತಿಪಟೂರುತಾಲ್ಲೂಕಿನಲ್ಲಿ ಫೈನಾನ್ಸ್ಗೆ ಹಣ ಕಟ್ಟಲು ಸಾಧ್ಯವಾಗದ ಕಾರಣ ಪೈನಾನ್ಸ್ ಸಿಬ್ಬಂದಿಗಳ ಒತ್ತಡ ತಡೆಯಲಾರದೇ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಶನಿವಾರ ನಡೆದಿದೆ.
ತಿಪಟೂರು ತಾಲ್ಲೂಕಿನ ಕುಪ್ಪಾಳು ಗ್ರಾಮದ ಪುಷ್ಪಲತಾ (36) ಮೃತ ಮಹಿಳೆ. ಮೂಲತಃ ಬಂಟವಾಳ ತಾಲ್ಲೂಕಿನವರಾಗಿದ್ದು ತಮ್ಮ ಕುಟುಂಬಸ್ಥರೊಂದಿಗೆ ತಿಪಟೂರು ತಾಲ್ಲೂಕಿನ ಕುಪ್ಪಾಳು ಗ್ರಾಮದಲ್ಲಿ ನೆಲೆಸಿದ್ದರು. ಖಾಸಗಿ ಫೈನಾನ್ಸ್ನಲ್ಲಿ 90 ಸಾವಿರ ಹಣ ಪಡೆದಿದ್ದು, ಆರೋಗ್ಯ ಸರಿ ಇಲ್ಲದ ಕಾರಣ ತಿಂಗಳಿನಿಂದ ಬಡ್ಡಿ ಕಟ್ಟಲು ಸಾಧ್ಯವಾಗದೇ ಬಾಕಿ ಉಳಿಸಿಕೊಂಡಿದ್ದರು. ಆದರೆ ಖಾಸಗಿ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಒತ್ತಡ ಹೆಚ್ಚಾದ ಕಾರಣದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಕಿಬ್ಬನಹಳ್ಳಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.