ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲಿಪುರದ ಪ್ರದೇಶದಲ್ಲಿ ಮಹಿಳೆಯೊಬ್ಬರು ವಾಂತಿ ಮಾಡಲು ಬಸ್ನಿಂದ ತಲೆ ಹೊರಹಾಕಿದ್ದು, ಬೇರೆ ಬಸ್ ಡಿಕ್ಕಿ ಹೊಡೆದು ತಲೆ ನಜ್ಜುಗುಜ್ಜಾಗಿದೆ. ಹೌದು, ಯಾವುದೇ ವಾಹನದ ಕಿಟಕಿಯಿಂದ ಕೈ-ತಲೆ ಹೊರಹಾಕುವುದು ದುರಂತಕ್ಕೆ ಕಾರಣವಾಗಬಹುದು.
ತನ್ನ ಸಹೋದರಿ,ಪತಿ,ಮೂವರು ಮಕ್ಕಳೊಂದಿಗೆ ಲುಧಿಯಾನಕ್ಕೆ ತೆರಳುತ್ತಿದ್ದರು. ವಾಂತಿ ಮಾಡಲು ಕಿಟಕಿಯಿಂದ ತಲೆ ಹೊರಹಾಕಿದ್ದರು. ಈ ವೇಳೆ ಮತ್ತೊಂದು ವಾಹನ ತಲೆಗೆ ಡಿಕ್ಕಿ ಹೊಡೆದಿದ್ದು, ತಲೆ ನಜ್ಜುಗುಜ್ಜಾಗಿ ಮೃತಪಟ್ಟಿದ್ದಾರೆ. ಮಹಿಳೆಯ ತಲೆಗೆ ಹೊಡೆದ ವಾಹನ ಪತ್ತೆಗೆ ಪೊಲೀಸರು ಶೋಧಿಸುತ್ತಿದ್ದಾರೆ.