ಪತ್ನಿಯನ್ನು ತವರಿಗೆ ಬಿಟ್ಟು ವಾಪಸ್ಸಾಗುತ್ತಿದಾಗ ಸಿಡಿಲು ಬಡಿದು ಯುವಕ ಸಾವು

ಹೊಸ ದಿಗಂತ ವರದಿ, ಮಂಡ್ಯ :

ಪತ್ನಿಯನ್ನು ತವರಿಗೆ ಬಿಟ್ಟು ವಾಪಸ್ಸು ಬರುವಾಗ ಸಿಡಿಲು ಬಡಿದು ಯುವ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕು ಹರಳಹಳ್ಳಿ ಗ್ರಾಮದಬಳಿ ನಡೆದಿದೆ.

ಮದ್ದೂರು ತಾಲೂಕು ವೈಧ್ಯನಾಥಪುರ ಗ್ರಾಮದ ಮಧು ಎಂಬಾತನೇ ಮೃತಪಟ್ಟ ಯುವಕನಾಗಿದ್ದು, ಈತ ತನ್ನ ಪತ್ನಿಯನ್ನು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದ ತವರಿಗೆ ಬಿಟ್ಟು ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದ.

ಮಳೆ, ಸಿಡಿಲು, ಗುಡುಗು ಹೆಚ್ಚಾದ ಹಿನ್ನೆಲೆಯಲ್ಲಿ ಬೈಕ್‌ನಿಂದ ಇಳಿದು ಹೆಲ್ಮೆಟ್ ಧರಿಸಿಕೊಂಡೇ ಹರಳಹಳ್ಳಿಯ ಹುರುಚಿಮರದ ಕೆಳಗೆ ನಿಂತಿದ್ದಾನೆ. ಈ ವೇಳೆ ಸಿಡಿಲು ಬಡಿತಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈತ ವೈದ್ಯನಾಥಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ‌್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಹಾಗಾಗಿ ವೈದ್ಯನಾಥಪುರ ಗ್ರಾಮಕ್ಕೆ ರಾತ್ರಿಯೇ ವಾಪಸ್ಸು ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!