ದಿಗಂತ ವರದಿ ಕಲಬುರಗಿ:
ಕುಡಿದ ಮತ್ತಿನಲ್ಲಿ ನೀರಿಗೆ ಹಾರಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಪಟವಾದ್ ಗ್ರಾಮದ ಬ್ರಿಜ್ ಕಂ ಬ್ಯಾರೇಜ್ ನಲ್ಲಿ ನಡೆದಿದೆ.
ಪಕ್ಕದ ಹೈದರಾಬಾದ್ ಮೂಲದ ಸಾಜೀದ್ (25) ಎಂಬ ಯುವಕ ನೀರಿನಲ್ಲಿ ಹಾರಿ ಸಾವನ್ನಪ್ಪಿದ್ದು, ನೀರಿಗೆ ಹಾರಿ ಮುಳುಗಿ ಮೃತಪಟ್ಟಿರುವ ದೃಶ್ಯಗಳು ಮೊಬೈಲ್ ನ ಸಿಸಿಟಿವಿ ಯಲ್ಲಿ ಸ್ನೇಹಿತರು ಸೆರೆ ಹಿಡಿದಿದ್ದಾರೆ.
ಮೃತ ಸಾಜೀದ್ ಹಾಗೂ ಆತನ ಸ್ನೇಹಿತರು ಚೇಂಗಟಾ ಗ್ರಾಮದ ದೇವರ ದರ್ಶನಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದ್ದು, ದರ್ಶನ ಬಳಿಕ ಕಂಠಪೂರ್ತಿ ಮಧ್ಯ ಸೇವನೆ ಮಾಡಿದ್ದಾರೆ.
ಸಾಜೀದ್ ಹಾಗೂ ಸ್ನೇಹಿತರು ಕಂಠಪೂರ್ತಿ ಕುಡಿದು ನೀರಿನಲ್ಲಿ ಈಜಲು ತೆರಳಿದಾಗ ಈ ವೇಳೆ ನೀರಿನಲ್ಲಿ ಮುಳುಗಿ ಸಾವಾಗಿರುವ ಘಟನೆ ನಡೆದಿದೆ. ಸಾಜೀದ್ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ಸಮಯದಲ್ಲಿ ಆತನ ಸ್ನೇಹಿತರು ಆತನ ಸಹಾಯಕ್ಕೆ ಯಾರು ಬಂದಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಕಮಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.