ಹೊಸದಿಗಂತ ವರದಿ, ಮಡಿಕೇರಿ:
ಕೊಡಗಿನ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಹೋಂ ಸ್ಟೇಯೊಂದರಲ್ಲಿ ಸಾವಿಗೀಡಾಗಿರುವುದು ಕಂಡು ಬಂದಿದೆ.
ಮೂಲತಃ ಚಿಕ್ಕಬಳ್ಳಾಪುರ ನಿವಾಸಿ ಅಭಿಷೇಕ್ (31) ಮೃತಪಟ್ಟ ದುರ್ದೈವಿ.
ಸಿನರ್ಜಿ ಟೆಕ್ನಾಲಾಜಿಸ್ ಕಂಪೆನಿಯ ಸಿಬ್ಬಂದಿ ಮಿತ್ರರೊಂದಿಗೆ ಅಭಿಷೇಕ್ ಶನಿವಾರ ಕೊಡಗು ಪ್ರವಾಸಕ್ಕೆ ಆಗಮಿಸಿದ್ದು, ದಕ್ಷಿಣಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮದ ಹೋಂಸ್ಟೇಯಲ್ಲಿ ತಂಗಿದ್ದರು. ಅಲ್ಲಿ ಅವರು ಸಾವಿಗೀಡಾಗಿದ್ದು, ಹೃದಯಾಘಾತ ಇಲ್ಲವೇ ಆಹಾರ ಸೇವನೆ (ಫುಡ್ ಪಾಯಿಸನ್) ಯಲ್ಲಿನ ವ್ಯತ್ಯಾಸ ಸಾವಿಗೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತರ ಶವಪರೀಕ್ಷೆಯ ನಂತರ ಸೋಮವಾರ ಮೃತದೇಹವನ್ನು ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲಾಗಿದೆ. ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ