ಹೊಸದಿಗಂತ ವರದಿ ಅಂಕೋಲಾ:
ಗಂಗಾವಳಿ ನದಿಯಲ್ಲಿ ಮೀನು ಹಿಡಿಯಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಯುವಕ ಮನೆಗೆ ಮರಳದೇ ಕಾಣೆಯಾದ ಘಟನೆ ತಾಲೂಕಿನ ಸಗಡಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳುವರೆಯಲ್ಲಿ ನಡೆದಿದೆ.
ಉಳುವರೆ ನಿವಾಸಿ ರಾಮಚಂದ್ರ ಹೊನ್ನಾ ಗೌಡ (30) ಕಾಣೆಯಾದ ವ್ಯಕ್ತಿಯಾಗಿದ್ದು ಈತ ರವಿವಾರ ಸಂಜೆ ಮನೆ ಸಮೀಪದ ಗಂಗಾವಳಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಹೋಗಿದ್ದವ ಮನೆಗೆ ಮರಳಿ ಬಂದಿಲ್ಲ ಎನ್ನಲಾಗಿದೆ.
ಊರವರು ಸೇರಿ ನದಿ ತೀರದಲ್ಲಿ ಹುಡುಕಾಟ ನಡೆಸಿದರೂ ಯುವಕನ ಪತ್ತೆಯಾಗದ ಕಾರಣ ಆತನ ಸಹೋದರ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ವ್ಯಕ್ತಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.