ಮುಸ್ಲಿಂ ವ್ಯಕ್ತಿಯಿಂದ ಮೋಸ ಹೋದ ಯುವತಿ ಆತ್ಮಹತ್ಯೆಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿ ಕೊನೆಗೆ ಬಲವಂತವಾಗಿ ಇಸ್ಲಾಂಗೆ ಮತಾತಂತರಗೊಳ್ಳುವಂತೆ ಕಿರುಕುಳ ನೀಡಿದ ಮುಸ್ಲಿಂ ವ್ಯಕ್ತಿಯಿಂದ ಮೋಸಕ್ಕೊಳಗಾದ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿ ಶೋಚನೀಯ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ.

ಕರ್ನಾಟಕದ ಉಡುಪಿಯ ಕೋಟೇಶ್ವರ ನಿವಾಸಿಯಾದ ಅಝೀಝ್ ಎಂಬಾತನೇ ಹಿಂದು ಯುವತಿಯ ಸಾವಿಗೆ ಕಾರಣನಾದ ವ್ಯಕ್ತಿ. ವರದಿಗಳ ಪ್ರಕಾರ ಮೂರು ವರ್ಷದ ಹಿಂದೆ ಉಡುಪಿಯ ಕುಂದಾಪುರ ಸಮೀಪದ ಉಪ್ಪಿನಕುದ್ರು ಗ್ರಾಮದ ನಿವಾಸಿ 25 ವರ್ಷದ ಶಿಲ್ಪಾ ದೇವಾಡಿಗ ಎಂಬಾಕೆ ಗಾರ್ಮೆಂಟ್ಸ್‌ ಅಂಗಡಿಯೊಂದರಲ್ಲಿ ಕೆಲಸಮಾಡುತ್ತಿದ್ದಳು. ಈ ಸಮಯದಲ್ಲಿ ಆಕೆಗೆ ಅಝೀಝ್‌ ನ ಪರಿಚಯವಾಗಿದೆ. ತನ್ನ ಪ್ರೀತಿಯ ಮಾಯಾಜಾಲಕ್ಕೆ ಆಕೆಯನ್ನು ಬೀಳಿಸಿದ ಆತ ಮೋಸದಿಂದ ಆಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ. ಆಕೆಯನ್ನು ಆಗಾಗ ಮನೆಗೆ ಕರೆದೊಯ್ಯುತ್ತಿದ್ದ. ಆತನಿಗೆ ಮದುವೆಯಾಗಿದ್ದರೂ ಪ್ರೀತಿಯ ಮಾಯೆಯಲ್ಲಿ ಸಿಲಿಕಿದ್ದ ಯುವತಿಗೆ ಆತನ ಮೋಸದ ಬ್ಗಗೆ ತಿಳಿಯಲಿಲ್ಲ.

ಆಕೆಯ ಅಶ್ಲೀಲ ವಿಡಿಯೋವನ್ನು ಸರೆಹಿಡಿದು ಇಸ್ಲಾಂಗೆ ಮತಾಂತರ ಗೊಳ್ಳುವಂತೆ ಒತ್ತಾಯಿಸಿದ್ದ. ಅವಳು ಮದುವೆಯ ಬಗ್ಗೆ ಪ್ರಶ್ನಿಸಿದಾಗ ಮದುವೆಯಾಗಲು ನಿರಾಕರಿಸಿದ್ದ. ವಿಡಿಯೋ ಇಟ್ಟುಕೊಂಡು ಆಕೆಗೆ ಬ್ಲಾಕ್‌ ಮೇಲ್‌ ಮಾಡಲಾರಂಭಿಸಿದ. ಇದರಿಂದ ಮನನೊಂದ ಯುವತಿ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಝೀಝ್ ಮದುವೆಯಾಗುವುದಾಗಿ ಭರವಸೆ ನೀಡಿ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಜೀಜ್ ಆತನ ಪತ್ನಿ ಸಲ್ಮಾ ಇಬ್ಬರೂ ಆಕೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಶಿಲ್ಪಾಳ ಪೋಷಕರು ಆರೋಪಿಸಿದ್ದಾರೆ. ಆಕೆ ಬರೆದಿಟ್ಟಿರುವ ಪತ್ರ ಪೋಲೀಸರ ಕೈಗೆ ಸಿಕ್ಕಿದ್ದು ಪತ್ರದಲ್ಲಿ ಆಖೆ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ ಎನ್ನಲಾಗಿದೆ. ಈ ʼಲವ್‌ ಜಿಹಾದ್‌ʼ ಪ್ರಕರಣವನ್ನು ವಿಶ್ವಹಿಂದು ಪರಿಷತ್‌ ಸೇರಿದಂತೆ ಹಿಂದು ಸಂಘಟನೆಗಳು ಖಂಡಿಸಿದ್ದು ಆಕೆಗೆ ನ್ಯಾಯ ನೀಡಲು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!