ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಗರೇಟ್ ಸೇದಿದ್ದನ್ನು ದುರುಗುಟ್ಟಿ ನೋಡಿದ ಎನ್ನುವ ಕಾರಣಕ್ಕೆ ಯುವತಿಯೊಬ್ಬಳು ವ್ಯಕ್ತಿಯನ್ನು ಬರ್ಬರವಾಗಿ ಕೊಂದಿದ್ದಾಳೆ.
ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಮನೆವಾಡ ಸಿಮೆಂಟ್ ರೋಡ್ ಜಯಶ್ರೀ ಪಂಢರೆ ಎಂಬಾಕೆ ಸಿಗರೇಟ್ ಸೇದುತ್ತಾ ನಿಂತಿದ್ದಳು. ಆಕೆಯನ್ನು ರಂಜಿತ್ ರಾಥೋಡ್ ಎಂಬಾತ ದುರುಗುಟ್ಟಿ ನೋಡಿದ್ದಾನೆ ಎನ್ನಲಾಗಿದೆ. ಇದರಿಂದ ಜಯಶ್ರೀ ಕೋಪಗೊಂಡಿದ್ದು, ತನ್ನ ಸ್ನೇಹಿತೆಯನ್ನು ಕರೆಸಿಕೊಂಡಿದ್ದಾಳೆ.
ರಂಜಿತ್ ಜೊತೆ ಮಾತಿಗಿಳಿದು ಜಗಳವಾಗಿದೆ. ಇದನ್ನು ಆತ ರೆಕಾರ್ಡ್ ಮಾಡಿಕೊಂಡಿದ್ದಾನೆ. ಆಕೆ ಸ್ವಲ್ಪವೂ ಹೆದರದೆ ಆತನ ಮುಖಕ್ಕೆ ಹೊಗೆ ಬಿಟ್ಟಿದ್ದಾಳೆ. ನಂತರ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ.
ನಾಲ್ಕು ಮಕ್ಕಳ ತಂದೆಯಾದ ರಂಜಿತ್ ವಾಪಾಸ್ ಮನೆಗೆ ಹೋಗಿದ್ದಾನೆ. ಆಕೆ ಆತನನ್ನು ಫಾಲೋ ಮಾಡಿ ಮನೆಯ ಬಳಿ ಚಾಕುವಿನಿಂದ ಮನಬಂದಂತೆ ತಿವಿದಿದ್ದಾಳೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಸ್ನೇಹಿತರು ಪರಾರಿಯಾಗಿದ್ದಾರೆ.