ಗುರುತು ಮರೆಮಾಚಲು ಉಗ್ರರಿಂದ ಆಧಾರ್‌ ಕಾರ್ಡ್‌ ದುರ್ಬಳಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಪಾಕಿಸ್ಥಾನಿ ಉಗ್ರರು‌ ಆಧಾರ್‌ ಕಾರ್ಡ್‌ ಬಳಸಿ ತಮ್ಮ ಗುರುತು ಮರೆಮಾಚಿಕೊಳ್ಳುತ್ತರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಭಾರತದ ವಿಶಿಷ್ಟ ಪ್ರಾಧಿಕಾರಕ್ಕೆ ಪತ್ರ ಬರೆದಿರುವ ಜಮ್ಮು ಕಾಶ್ಮೀರ ಪೋಲೀಸರು ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಮನವಿ ಮಾಡಿದ್ದಾರೆ. ಇತ್ತೀಚಿಗೆ ಶ್ರೀನಗರದ ಭಿಷೆಂಬರ್‌ ನಗರದಲ್ಲಿ ಭದ್ರತಾಪಡೆಗಳು ಇಬ್ಬರು ಉಗ್ರರನ್ನು ಹೊಡದು ಹಾಕಿದ ನಂತರ ಅವರು ಆಧಾರ್‌ ಕಾರ್ಡ್‌ ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದ್ದು ಹತ್ಯೆಯಾದ ಜಾಗದಲ್ಲಿ ಜಮ್ಮು ವಿಳಾಸ ಹೊಂದಿರುವ ಆಧಾರ್‌ ಕಾರ್ಡ್‌ಗಳಿಗೆ ಉಗ್ರರು ತಮ್ಮ ಭಾವಚಿತ್ರ ಹಾಕಿರುವುದು ಪತ್ತೆಯಾಗಿದೆ.

ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದಿಂದ ನಾಗರೀಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೊಡಮಾಡುವ ಆಧಾರ್‌ ಕಾರ್ಡ್‌ ಉಗ್ರ ಕೃತ್ಯಗಳಿಗೆ ಬಳಕೆಯಾಗುತ್ತಿರುವುದು ಆತಂಕದ ವಿಷಯವಾಗಿದ್ದು ಆಧಾರ್‌ ಮಾಹಿತಿ ದುರ್ಬಳಕೆಯಾಗದಂತೆ ತಡೆಗಟ್ಟಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವಂತೆ ಪೋಲೀಸರು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!