ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಚುನಾವಣೆ ಬಳಿಕ 5 ಸ್ಥಾನ ಗೆದ್ದು ಖಾತೆ ತೆರೆದ ಆಮ್ ಆದ್ಮಿ ಪಕ್ಷ ಇದೀಗ ಮತ್ತಷ್ಟು ಸದೃಢಗೊಳ್ಳಲು ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡಲು ಹೊರಟಿದೆ.
ಚುನಾವಣೆಯ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ, ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಸೇರಿದಂತೆ ಪಕ್ಷದ ಇಡೀ ಸಂಘಟನೆಯ ಮೇಲುಸ್ತುವಾರಿಗಳನ್ನು ಬದಲಿಸಲಾಗಿದೆ.
ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಧ್ವಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಗೋಪಾಲ್ ಇಟಾಲಿಯಾ ಅವರನ್ನು ರಾಷ್ಟ್ರೀಯ ಸೇವೆಗೆ ನಿಯೋಜಿಸಲಾಗಿದ್ದು, ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಇಟಾಲಿಯಾ ಅವರಿಗೆ ಮಹಾರಾಷ್ಟ್ರದ ಸಹ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿದೆ.
ಅಲ್ಪೇಶ್ ಕಥಿರಿಯಾ ಅವರನ್ನು ಸೂರತ್ ಸೇರಿದಂತೆ ರಾಜ್ಯದ ನಾಲ್ಕೂ ವಲಯಗಳಲ್ಲಿ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದಕ್ಷಿಣ ಗುಜರಾತ್ ವಲಯದ ಉಸ್ತುವಾರಿಯನ್ನು ಚೈತರ್ ವಾಸವಾಗೆ, ಸೌರಾಷ್ಟ್ರ ವಲಯದ ಉಸ್ತುವಾರಿಯನ್ನು ಜಗ್ಮಲ್ ವಾಲಾ ನೀಡಲಾಗಿದೆ.
ಉತ್ತರ ಗುಜರಾತ್ನ ಜವಾಬ್ದಾರಿಯನ್ನು ಡಾ.ರಮೇಶ್ ಪಟೇಲ್ಗೆ, ಮಧ್ಯ ಗುಜರಾತ್ನ ಜವಾಬ್ದಾರಿಯನ್ನು ಜ್ಯುವೆಲ್ ವಸ್ರಾ ಮತ್ತು ಕಚ್ ವಲಯದ ಉಸ್ತುವಾರಿಯನ್ನು ಕೈಲಾಶ್ ಗಧ್ವಿಗೆ ವಹಿಸಿದೆ.