ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಲು ಕೆ ಎಸ್.ಈಶ್ವರಪ್ಪ ಪಣತೊಟ್ಟಿದ್ದಾರೆ, ಈಶ್ವರಪ್ಪ ಅವರ ಈ ನಿರ್ಧಾರಕ್ಕೆ ಮಠಾಧೀಶರು, ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ. ಈಶ್ವರಪ್ಪ ನಿವಾಸಕ್ಕೆ ಆನಂದ್ ಗುರೂಜಿ ಭೇಟಿ ನೀಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಶ್ವರಪ್ಪ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಗುರೂಜಿ ತಿಳಿಸಿದ್ದಾರೆ.
ಇಂದು ಕೆ ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಆನಂದ್ ಗುರೂಜಿ ಅವರು ಈಶ್ವರಪ್ಪನವರ ನಿರ್ಧಾರ ಸರಿಯಾಗಿ ಇದೆ. ಅವರನ್ನು ಗೆಲ್ಲಿಸಿ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ. ಈ ಹಂತದಲ್ಲಿ ಆನಂದ್ ಗುರೂಜಿಯವರ ಆಶೀರ್ವಾದ ಪಡೆದ ಈಶ್ವರಪ್ಪ, ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಆನಂದ ಗುರೂಜಿ, ಈಶ್ವರಪ್ಪನವರು ಧರ್ಮಕ್ಕಾಗಿ ಹೋರಾಡಿದವರು. ಇಂತಹ ನಾಯಕತ್ವದ ಅಗತ್ಯವಿದೆ. ಇಂಥವರು ರಾಜಕೀಯದಲ್ಲಿ ಇರಬೇಕು. ಈಶ್ವರಪ್ಪ ಅವರಿಗೆ ಅನ್ಯಾಯವಾಗಬಾರದು. ಈಶ್ವರಪ್ಪ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬೇಕು ಎಂದರು.