ಜಾಲತಾಣಗಳಲ್ಲಿ ತೇಜೋವಧೆ, ಧಮ್ಕಿ: ಎಫ್‌ಐಆರ್ ದಾಖಲಿಸಿದ ನಟ ಜಗ್ಗೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ‘ಹುಲಿ ಉಗುರು’ ಕುರಿತಾದ ಹೇಳಿಕೆಯೊಂದನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿ ಟೀಕಿಸುತ್ತಿರುವವರ ಮೇಲೆ ನಟ ಜಗ್ಗೇಶ್ ಪ್ರಕರಣ ದಾಖಲಿಸಿದ್ದಾರೆ.

‘ರಂಗನಾಯಕ’ ಚಿತ್ರದ ಕುರಿತಾಗಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಹುಲಿ ಉಗುರಿನ ಕುರಿತಾಗಿ ಪ್ರಸ್ತಾವಿಸಿದ್ದ ಜಗ್ಗೇಶ್, ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಪದವೊಂದನ್ನು ಬಳಕೆ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಈ ಹೇಳಿಕೆಯನ್ನು ತಿರುಚಿ ಕೆಲವರು ಜಗ್ಗೇಶ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಕೆಲವರೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವಿಡಿಯೋ ಮೂಲಕ ಆಕ್ರೋಶದ ಮಾತುಗಳನ್ನಾಡಿದ್ದರು. ಜಗ್ಗೇಶ್ ಮನೆಗೆ ಮುತ್ತಿಗೆ ಹಾಕುವ ಪ್ರಸ್ತಾಪಗಳೂ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

ಟೀಕೆಗಳು ತಾರಕಕ್ಕೇರುತ್ತಿದ್ದಂತೆಯೇ ಜಗ್ಗೇಶ್ ಕಾನೂನಿನ ಮೊರೆ ಹೋಗಿದ್ದು, ತಮ್ಮ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!