‘ಅಲ್ಲಿ ಆನೆ ತುಳಿದ್ರೆ 15 ಲಕ್ಷ, ನಮ್ ರಾಜ್ಯದಲ್ ತುಳಿದ್ರೆ 5 ಲಕ್ಷ, ಇದ್ಯಾವ್ ಲೆಕ್ಕ ಸ್ವಾಮಿ?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಆನೆ ತುಳಿತದಿಂದ ಟ್ರ್ಯಾಕ್ಟರ್ ಚಾಲಕ ಮೃತಪಟ್ಟಿದ್ದು, ಕರ್ನಾಟಕದಿಂದ ಚಾಲಕನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು, ನಮ್ಮ ರಾಜ್ಯದಲ್ಲಿ ಆನೆ ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ಬರೀ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಇದೇ ಕಾಂಗ್ರೆಸ್ ಸರ್ಕಾರ ಕೇರಳದಲ್ಲಿ ಮೃತರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಇದು ಯಾವ ಸೀಮೆ ಲೆಕ್ಕಾಚಾರ ಎಂದು ಗರಂ ಆಗಿದ್ದಾರೆ.

ಐದು ಲಕ್ಷ ರೂಪಾಯಿ ಪಡೆಯಲೂ ಮೃತರ ಕುಟುಂಬ ಎಷ್ಟೆಲ್ಲಾ ಕಚೇರಿಗಳಿಗೆ ಓಡಾಡ್ಬೇಕು, ನಮ್ಮ ತೆರಿಗೆ ಹಕ್ಕಿನ ಹಣವನ್ನು ಸಿಎಂ ಕೇರಳಕ್ಕೆ ಕೊಟ್ಟಿದ್ದಾರೆ. ಇದನ್ನು ಒಪ್ಪುವುದಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!