ಹರಿದ್ವಾರದಲ್ಲಿ ತಾಯಿಯ ಚಿತಾಭಸ್ಮ ವಿಸರ್ಜಿಸಿದ ನಟ ಮಹೇಶ್ ಬಾಬು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಾಲಿವುಡ್​ ಸೂಪರ್​ ಸ್ಟಾರ್​ ನಟ ಮಹೇಶ್ ಬಾಬು ಅವರ ತಾಯಿ, ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ.

ಇಂದು ಅವರ ಪುತ್ರ ಹರಿದ್ವಾರದ ವಿಐಪಿ ಘಾಟ್‌ನಲ್ಲಿ ತಾಯಿಯ ಚಿತಾಭಸ್ಮವನ್ನು ವಿಸರ್ಜನೆ ಮಾಡಿದ್ದಾರೆ.
ತೀರ್ಥ ಪುರೋಹಿತ್ ಅಖಿಲೇಶಾನಂದ ಶರ್ಮಾ ಗೋವಿಂದ್ ಅವರು ಈ ಸಂದರ್ಭದಲ್ಲಿ ಚಿತಾಭಸ್ಮ ವಿಸರ್ಜನೆಯ ವಿಧಿವಿಧಾನವನ್ನು ನೆರೆವೇರಿಸಿಕೊಟ್ಟಿದ್ದಾರೆ.

ಕೃಷ್ಣ-ಇಂದಿರಾದೇವಿ ದಂಪತಿಗೆ ರಮೇಶ್ ಬಾಬು ಮತ್ತು ಮಹೇಶ್ ಬಾಬು ಇಬ್ಬರು ಗಂಡು ಮಕ್ಕಳು ಹಾಗೂ ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ ಎಂಬ ಮೂವರು ಹೆಣ್ಮಕ್ಕಳು. ಅನಾರೋಗ್ಯ ಸಮಸ್ಯೆಯಿಂದ ಜನವರಿ 8ರಂದು ರಮೇಶ್ ಬಾಬು ಮೃತಪಟ್ಟಿದ್ದರು. ಇದೀಗ ಇಂದಿರಾದೇವಿ ನಿಧನದಿಂದ ಮಹೇಶ್ ಕುಟುಂಬ ತೀವ್ರ ದುಃಖದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!