ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಿವರಾಜ್ ಕುಮಾರ್ ಪೇಮೆಂಟ್ ತೆಗೆದುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಆರೋಪಕ್ಕೆ ಶಿವಣ್ಣ ಗರಂ ಆಗಿದ್ದು, ಆ ಮಾತನ್ನು ಸಂಬರಗಿ ವಾಪಸ್ ಪಡೆಯಬೇಕು ಎಂದು ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ಪ್ರಚಾರ ನಡೆಸಿದ ಶಿವರಾಜ್ ಕುಮಾರ್, ಹಣ ಪಡೆದು ಪ್ರಚಾರಕ್ಕೆ ಬಂದಿದ್ದೇನೆ ಎಂಬ ಮಾತನ್ನು ವಾಪಸ್ ಪಡೆಯಬೇಕು. ಹಾಗೆ ಮಾತನಾಡುವುದು ಸರಿಯಲ್ಲ, ನನ್ನ ಬಳಿ ಹಣವಿಲ್ವಾ? ನಾನು ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಹಣ ಪಡೆದು ಇಲ್ಲಿಗೆ ಬಂದಿಲ್ಲ, ಹೃದಯದಿಂದ ಬಂದಿದ್ದೇನೆ, ವ್ಯಕ್ತಿಗಾಗಿ ಬಂದಿದ್ದೇನೆ. ಯಾರನ್ನೋ ಟೀಕೆ ಮಾಡಲೂ ಬಂದಿಲ್ಲ, ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ ಎಂದು ಗರಂ ಆದರು.