ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಸಂಜೆ ಸಿದ್ಧಾರ್ಥ್ ʻಚಿಕ್ಕುʼ ಸಿನಿಮಾ ಪ್ರಮೋಷನ್ ಪ್ರೆಸ್ಮೀಟ್ ತಡೆದಿದ್ದಕ್ಕೆ ನಟ ಪ್ರಕಾಶ್ ರಾಜ್ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ʻಕಾವೇರಿ ನಮ್ಮದು ಹೌದು.. ನಮ್ಮದೇ.. ಆದರೆ.. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಆದರೆ ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹ್ರುದಯ ಕನ್ನಡಿಗರ ಪರವಾಗಿ ಕ್ಷಮಿಸಿ ಎಂದು ನಟ ಸಿದ್ಧಾರ್ಥ್ ಅವರಲ್ಲಿ ಕ್ಷಮೆ ಕೋರಿದ್ದಾರೆ.
ಮಲ್ಲೇಶ್ವರದ ಮಾಲ್ವೊಂದರಲ್ಲಿ ಸಿದ್ಧಾರ್ಥ್ ಪ್ರೆಸ್ಮೀಟ್ ಸ್ಥಳಕ್ಕೆ ಕರವೇ ಕಾರ್ಯಕರ್ತರು ಭೇಟಿ ಕೊಟ್ಟು, ಸುದ್ದಿಗೋಷ್ಟಿ ನಡೆಸದಂತೆ ಅಡ್ಡಿಪಡಿಸಿದರು. ಸಿದ್ಧಾರ್ಥ್ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿ ಹೊರನಡೆದರು.