ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ನೀರು ಹರಿಸುತ್ತಿರುವಾಗಿ ವಿಚಾರದಲ್ಲಿ ಕರ್ನಾಟಕದಲ್ಲಿ ಪ್ರತಿಭಟನೆ ʻಕಾವೇರಿʼದೆ. ಈ ಕುರಿತು ಮಾತನಾಡಿದ ತಮಿಳುನಾಡು ಡಿಎಕೆ ನಾಯಕ ಇದೆಲ್ಲಾ ಬರೀ ನಾಟಕ ಎಂದು ಕರ್ನಾಟಕದ ಕಾಲೆಳೆದಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ʻಕರ್ನಾಟಕ ಬಿಜೆಪಿ ನಾಯಕರು ನೀರು ಬಿಡದಂತೆ ಕರ್ನಾಟಕ ಸರ್ಕಾರವನ್ನು ಪ್ರಚೋದಿಸುತ್ತಿದ್ದಾರೆ. ಸ್ಥಳೀಯ ರಾಜಕೀಯದಿಂದಾಗಿ ಆಡಳಿತ ಪಕ್ಷವೂ ಅದಕ್ಕೆ ಮಣಿಯುತ್ತಿದೆʼ ಎಂದರು.
ಕಾವೇರಿ ಕರ್ನಾಟಕದ ಸ್ವತ್ತಲ್ಲ, ಅದು ಅವರಿಗೆ ತಿಳಿದಿರಬೇಕು. ಕಾವೇರಿ ನೀರು ಎಲ್ಲೆಲ್ಲಿ ಹರಿಯುತ್ತದೆಯೂ ಅದೆಲ್ಲಾ ರಾಜ್ಯಕ್ಕೆ ಮತ್ತು ವಿಶೇಷವಾಗಿ ನದಿಯ ಕೆಳಭಾಗದ ರಾಜ್ಯಗಳಿಗೆ ನೀರು ನೀಡಬೇಕು. ಕರ್ನಾಟಕದಲ್ಲಿ ಇಂದು ನಡೆಯುತ್ತಿರುವ ಮುಷ್ಕರವು ಕೇವಲ ರಾಜಕೀಯ ಪ್ರೇರಿತ ಎಂದು ಕರೆದರು.