ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಛಲವಾದಿ ಪಾಳ್ಯದ ನಿವಾಸಿಗಳ ಮನೆಗೆ ಬರುವ ನಲ್ಲಿ ನೀರಿಗೆ ಕೊಳಚೆ ನೀರು ಮಿಶ್ರಿತವಾಗಿದೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ತಮ್ಮ ಸಮಸ್ಯೆಯನ್ನು ಈಕೂಡಲೇ ಸರಿಪಡಿಸಿ ಎಂದು ಪಟ್ಟು ಹಿಡಿದ್ದಾರೆ. ಇದಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅವರು ಮನೆಗಳ ಪೈಪ್ಲೈನ್ ಸಂಪರ್ಕವೇ ಕಳಪೆ ಮಟ್ಟದಲ್ಲಿದೆ ಎಂದು ಹೇಳಿದೆ.
ಒಂದೂವರೆ ವರ್ಷ ಆಯ್ತು ಸ್ವಾಮಿ, ಯಾವಾಗ್ ಬೇಕಂದ್ರೆ ಆಗ ನಲ್ಲಿಲಿ ಚರಂಡಿ ನೀರ್ ಬರತ್ತೆ, ವಾಸ್ನೆ ಬೇರೆ, ಜೀವ್ನ ಮಾಡೋದೇ ಕಷ್ಟ ಆಗಿದೆ. ಮಾಧ್ಯಮದವರು ನಮ್ಮ ಸಮಸ್ಯೆ ಮೇಲೆ ಬೆಳಕ್ ಚಲ್ಲಿದ್ ಮೇಲೆ ಸ್ವಲ್ಪ ಸಮಾಧಾನ ಆಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.